ಶಹಾಪುರ. ಬೈಕ್‌ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳ ಬಂಧನ: 13 ಬೈಕ್ ಹಾಗೂ ದೇವಸ್ಥಾನದ ಹುಂಡಿಯಿಂದ ಕದ್ದ 15 ಸಾವಿರ ಹಣ ವಶ

ಯಾದಗಿರಿ : ಜಿಲ್ಲೆಯ ವಿವಿಧ ಕಡೆಗಳ ಮೋಟರ್ ಬೈಕ್ ಕಳವು ಪ್ರಕರಣ ಬೇಧಿಸಿರುವ ಶಹಾಪುರ ಪೊಲೀಸರು, 13 ಬೈಕ್‌ ಕಳವು ಮಾಡಿದ 3 ಜನ ಆರೋಪಿಗಳನ್ನು ಶನಿವಾರ ಬಂಧಿಸಿ ಅವರಿಂದ ವಶಪ‍ಡಿಸಿಕೊಂಡ ಬೈಕ್‌ಗಳ ಒಟ್ಟು ಮೌಲ್ಯ 8 ಲಕ್ಷ ಹಾಗೂ ದೇವಸ್ಥಾನದ ಹುಂಡಿ ಹಣ ಕದ್ದ 15 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ರಸ್ತಾಪುರ ಗ್ರಾಮದ ಸಂತೋಷ್ ಶರಣಗೌಡ ಅರಿಕೇರಿ, ಖಂಡಪ್ಪ ಮಲ್ಲಪ್ಪ ನಾಯ್ಕೋಡಿ ಹಾಗೂ ಮದ್ರಿಕಿ ಗ್ರಾಮದ ದೇವರಾಜ ಗುರುಲಿಂಗಪ್ಪ ಅಗಸರ ಬಂಧಿತ ಆರೋಪಿಗಳಾಗಿದ್ದಾರೆ.

ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಜಿ ಸಂಗೀತಾ, ಸುರಪುರ ಡಿವೈಎಸ್ಪಿ ಜಾವಿದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.

ನಗರದ ವಾಲ್ಮೀಕಿ ಚೌಕ ಹತ್ತಿರ 3 ಜನ ಅನುಮಾನಾಸ್ಪದವಾಗಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ತಿರುಗಾಡುತ್ತಿದ್ದನ್ನು ಕಂಡ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಶಹಾಪುರ, ವಡಿಗೇರಾ, ಸೈದಾಪುರ್ ಹಾಗೂ ಜೇವರ್ಗಿ ಹಲವು ಕಡೆ ಬೈಕ್ ಕಳ್ಳತನ ಕಳುವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ವಡಿಗೇರ ತಾಲೂಕಿನ ಬಸಂತಪೂರ ಗ್ರಾಮದಲ್ಲಿ ಇತ್ತೀಚೆಗೆ ಮರೆಮ್ಮ ದೇವಿ ದೇವಾಲಯದ ಹುಂಡಿ ಹಣ ಸಹ ಕದ್ದಿರುವದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಹುಂಡಿ ಹಣದಲ್ಲಿ ಖರ್ಚು ಮಾಡಿ ಉಳಿದ 15 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳರ ಪತ್ತೆಗೆ ಬಲೆ ಬೀಸಿದ ಪೊಲೀಸ್ ತಂಡ.

ಶಹಾಪುರ ಠಾಣೆಯ ಪಿಐ ಎಸ್ಎಂ ಪಾಟೀಲ್, ಪಿಎಸ್ಐ ಶಾಮ್ ಸುಂದರ್ ನಾಯಕ್, ಪೋಲಿ ಸಿಬ್ಬಂದಿಗಳಾದ ಸಿದ್ದರಾಮಯ್ಯ, ಲಕ್ಕಪ್ಪ, ರಾಮಚಂದ್ರ, ಶಿವಲಿಂಗ, ಧರ್ಮರಾಜ, ಜುಬೇರ್ ಪಟೇಲ್, ಮುತ್ತಪ್ಪ, ಮಹಾದೇವಪ್ಪ ತಂಡದಲ್ಲಿದ್ದರು.

ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್ ಪಿ ಹಾಗೂ ಡಿವೈಎಸ್ಪಿ ಅವರು ಅಭಿನಂದಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ