ವರ್ಗಾವಣೆಯಾದ ಅಂಗನವಾಡಿ ಮೇಲ್ವಿಚಾರಕಿಗೆ ಕಣ್ಣೀರ ಬೀಳ್ಕೊಡುಗೆ: ಕರ್ತವ್ಯದಲ್ಲಿ ನಿಷ್ಠೆ ಪ್ರಮಾಣಿಕತೆ ಇದ್ದರೆ ಸಮಾಜದಲ್ಲಿ ಗೌರವ ಮೀನಾಕ್ಷಿ ಪಾಟೀಲ್,

ವರದಿ: ಮಲ್ಲಯ್ಯ ಪೋಲಂಪಲ್ಲಿ.

ಕ್ರಾಂತಿ ವಾಣಿ ವಾರ್ತೆ ಶಹಾಪುರ.

ಸಾರ್ವಜನಿಕರೊಂದಿಗೆ ಬೆರೆತು ಅವರ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮಾಡಿಕೊಟ್ಟಲ್ಲಿ ಮನಸ್ಸಿಗೆ ತೃಪ್ತಿ ತರುತ್ತದೆ. ಮೇಲ್ವಿಚಾರಕಿ ನಂದಾ ಅವರು ತಮ್ಮ ಸೇವಾವಧಿಯಲ್ಲಿ ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಕಚೇರಿಗೆ ಎಂದೂ ತಡವಾಗಿ ಬಂದವರಲ್ಲ. ತಮ್ಮ ಪಾಲಿನ ಕೆಲಸವನ್ನು ಅಂದೆ ಮಾಡಿಮುಗಿಸುತ್ತಿದ್ದರು. ಅಂಗನವಾಡಿ ಕಾರ್ಯಕರ್ತರಿಗೆ ಉತ್ತಮ ಮಾರ್ಗದರ್ಶನ ನೀಡಿ, ಇಲಾಖೆ ಕೆಲಸ ಅಚ್ಚುಕಟ್ಟಾಗಿ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಪ್ರೀತಿ ವಿಶ್ವಾಸದಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತರ ಮನ ಗೆದ್ದಿದ್ದರು. ಅವರು ಇಲ್ಲಿಂದ ವರ್ಗಾವಣೆಯಾಗಿ ಹೋದ ಸ್ಥಳದಲ್ಲಿಯೂ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸಲಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಅವರು ತಿಳಿಸಿದರು.

ತಾಲೂಕಿನ ಭೀಮರಾಯನ ಗುಡಿ ಯ ಶ್ರೀ ಸಿದ್ಧಾರೂಢ ಮಠದ ಪ್ರಸಾದ ನಿಲಯದಲ್ಲಿ ಶಹಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿ ಬಿಜಾಪುರ ಜಿಲ್ಲೆ ಇಂಡಿ ತಾಲೂಕಿಗೆ ವರ್ಗಾವಣೆಯಾದ ಅಂಗನವಾಡಿ ಮೇಲ್ವಿಚಾರಕಿ ನಂದಾ ಅವರ ವರ್ಗಾವಣೆ ನಿಮಿತ್ಯ ಆಯೋಜಿಸಿರುವ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಾಗರಿಕ ರಿಂದ ವೈಯಕ್ತಿಕವಾಗಿ ಸನ್ಮಾನಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗೋಗಿಯ ಪಾಂಡುರಂಗ ಮಠದ ವಿಜಯಕುಮಾರ ಸ್ವಾಮೀಜಿ ಮಾತನಾಡಿದ, ನಂದಾ ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಇವರು ಕಛೇರಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು, ಸಹಬಾಳ್ವೆ, ಸಹಕಾರ, ಸದಾಚಾರ, ಸುಕೋಮಲತೆ ಇತ್ಯಾದಿ ಮೌಲ್ಯಗಳಿಂದ ಕೂಡಿದ ಅನನ್ಯ ವ್ಯಕ್ತಿತ್ವ ಇವರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೇ ಬಸಲಿಂಗಮ್ಮ ನಾಟೇಕಾರ ಅವರು ಮೇಲ್ವಿಚಾರಕಿ ನಂದಾ ಮೇಡಂ ಅವರು ತಾಯಿಆಗಿ, ಸಹೋದರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಕಾರ್ಯ ಚಟುವಟಿಕೆ ನಾವೆಲ್ಲ ಅಳವಡಿಸಿಕೊಳ್ಳೊಣ ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಲ್ವಿಚಾರಕಿ ನಂದಾ ಅವರು, ಸರ್ಕಾರಿ ಕೆಲಸದಲ್ಲಿ ಇಂದಿನ ಕೆಲಸ ಇಂದೇ ಮಾಡಬೇಕು. ನಾಳೆಯ ಕೆಲಸವೂ ಇಂದೇ ಮಡಬೇಕು ಎಂಬ ಮನೋಭಾವವನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆ ಸಹೋದರಿಯರು ಹೊಂದಬೇಕು. ಇಲ್ಲಿ ನಾನು ಸೇವೆ ಸಲ್ಲಿಸುವಾಗ ನನಗೆ ಎಲ್ಲರೂ ಪ್ರೀತಿ ವಿಶ್ವಾಸ, ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ನೀಡಿದ ಎಲ್ಲಾ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಯರಿಗೂ, ಸಹಪಾಠಿ ಗಳಿಗೂ ಹಾಗೂ ಅಂಗನವಾಡಿ ಕಾರ್ಯಕರ್ತೆಯಾರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ವಿವಿಧ ಸಂಘಟನೆಯ ಮುಖಂಡರು ಸಾರ್ವಜನಿಕರು, ಇತರೆ ಇಲಾಖೆಯ ಸಹಪಾಠಿಗಳಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಿರ್ಗಮಿತ ಅಂಗನವಾಡಿ ಮೇಲ್ವಿಚಾರಕಿ ನಂದಾ ಅವರು ನುಡಿದರು.

ಈ ಕಾರ್ಯಕ್ರಮದಲ್ಲಿ, ಯೋಗ ಗುರು ಅಮರೇಶ್ ದಿಗ್ಗಿ, ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಡಾ. ವೆಂಕಟೇಶ್, ಆರೋಗ್ಯ ಹಿರಿಯ ಸಹಾಯಕ ಅಧಿಕಾರಿ ಮಲ್ಲಪ್ಪ ಕಾಂಬಳೆ, ಎಲ್ಐಸಿ ಏಜೆಂಟ್ ರಾದ ಶರಣಪ್ಪ ಹೊಸಮನಿ, ಅಮರೇಶ್ ಪ್ಯಾಟಿ, ಮುಖ್ಯ ಗುರು ಲಕ್ಕಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿ ಗೋಗಿ, ಅನಸೂಯ ಮದ್ರಿಕಿ, ಮಡಿವಾಳಮ್ಮ ಹೂಗಾರ್, ಯಮನಮ್ಮ ದೋರನಹಳ್ಳಿ, ಕವಿತಾ ಶೋಭಾ ಶಶಿಕಲಾ ಅವ್ವಮ್ಮ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು. ರೇಣುಕಾ ಗೋಗಿ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಅವರು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ