ಶಹಾಪುರ- ಧಾರವಾಡ ನೂತನ ಬಸ್ ಪ್ರಾರಂಭ: ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಿ, ಅಕ್ಬರ್ ಭಾಷಾ

ಕ್ರಾಂತಿ ವಾಣಿ ವಾರ್ತೆ ಶಹಾಪುರ.

ಶಹಾಪುರ ದಿಂದ ಹುಬ್ಬಳ್ಳಿ /ಧಾರವಾಡ ವಾಯಾ: ಗೋಗಿ-ಕೆಂಭಾವಿ- ಹುಣಸಗಿ- ತಾಳಿಕೋಟಿ – ಮುದ್ದೇಬಿಹಾಳ-ಬಾಗಲಕೋಟ -ನರಗುಂದ ಮಾರ್ಗವಾಗಿ ನೂತನ ಬಸ್ ಪ್ರಾರಂಭಿಸಾಲಾಗುತ್ತಿದ್ದು. ಶಹಾಪುರ ದಿಂದ ರಾತ್ರಿ ೦೮:೦೦ ಬಿಟ್ಟು ಧಾರವಾಡ ಬೆಳಿಗ್ಗೆ ೬ ಗಂಟೆ ಗೆ ತಲುಪುತ್ತದೆ,ಅದರಂತೆ ದಾರವಾಡ ದಿಂದ ಸಾಯಂಕಾಲ ೦೬:೪೫ ಕ್ಕೆ ಮರಳಿ ಬಿಟ್ಟು ಅದೇ ಮಾರ್ಗವಾಗಿ ಶಹಪೂರಕ್ಕೆ ಬೆಳಗ್ಗೆ ೫:೦೦ ಗಂಟೆಗೆ ತಲುಪುವುದು ಎಂದು ಘಟಕ ವ್ಯೆವಸ್ಥಾಪಕರಾದ ಅಕ್ಬರ್ ಭಾಷಾ ತಿಳಿಸಿದ್ದಾರೆ, ವಿಭಾಗಿಯ ನಿಯಂತ್ರನಾಧಿಕಾರಿಗಳು ಯಾದಗಿರಿ ಹಾಗೂ ವಿಭಾಗಿಯ ಸಂಚಾರಾಧಿಕಾರಿಗಳು ಯಾದಗಿರಿ ಹಾಗೂ ವಿಭಾಗಿಯ ತಾಂತ್ರಿಕ ಶಿಲ್ಪಿಗಳ ಆದೇಶದನ್ವಯ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಬಸ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ,ಚಾರ್ಜ್ ಮ್ಯಾನ್ ಮಲ್ಲಿಕಾರ್ಜುನ್,ಜೂನಿಯರ್ ಅಸಿಸ್ಟೆಂಟ್ ಪರಮಣ್ಣ,ನಿರ್ವಾಹಕ ಸಂಜೀವ ಬಿರಾದರ,ಚಾಲಕ ಶಾಂತಯ್ಯ,ಎಟಿಎಸ್ ಪಾಂಡು ರಂಗ ಕುಲಕರ್ಣಿ,ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸಿತರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ