ಬಿಸಿಯೂಟಕ್ಕೆ ಸರಕಾರಿ ಶಾಲೆಗಳಲ್ಲಿ ಅಡುಗೆ ಅನಿಲ ತಾಪತ್ರಯ

ವರದಿ: ನಾಗರಾಜ್ ನ್ಯಾಮತಿ

ಸರಕಾರಿ ಶಾಲೆಗಳಿಗೆ ಸಮರ್ಪಕವಾಗಿ ವಿತರಣೆಯಾಗದ ಅಡುಗೆ ಅನಿಲ

ಮೂರು ತಿಂಗಳಿಂದ ಹಣ ಹೊಂದಿಸಲು ಹೆಣಗಾಡುತ್ತಿರುವ ಗ್ಯಾಸ್ ಏಜೆನ್ಸಿಗಳು
ಕ್ರಾಂತಿವಾಣಿ ವಾರ್ತೆ ಸುರಪುರ: ಸರಕಾರಿ ಶಾಲೆಗಳಿಗೆ ಅಡುಗೆ ಅನಿಲ ಸಮರ್ಪಕ ಪೂರೈಕೆಯಾಗದ ಪರಿಣಾಮ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಅಡುಗೆ ಮಾಡಲು ಪರದಾಡುವ ಸ್ಥಿತಿ ಸುರಪುರ ಮತಕ್ಷೇತ್ರದಲ್ಲಿ ನಿರ್ಮಾಣವಾಗಿದೆ.
ಮತಕ್ಷೇತ್ರದಲ್ಲಿ ೪೧೧ ಶಾಲೆಗಳಿದ್ದು, ಇದರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-೧೮೧, ಹಿರಿಯ ಪ್ರಾಥಮಿಕ ಶಾಲೆ-೧೭೦, ಪ್ರೌಢಶಾಲೆ-೭೦ ಇವೆ. ಬಹುತೇಕ ಶಾಲೆಗಳಲ್ಲಿ ಜುಲೈ ನಿಂದ ಸೆಪ್ಟೆಂಬರ್ ವರೆಗೆ ಅಡುಗೆ ಅನಿಲ ಸಮರ್ಪಕವಾಗಿ ವಿತರಣೆಯಾಗಿಲ್ಲ. ಪ್ರಸ್ತುತ ಕಳೆದೆರಡು ತಿಂಗಳಿಂದ ಸಮಸ್ಯೆ ಎದುರಾಗಿದ್ದರೂ ಯಾರೊಬ್ಬರೂ ಬಾಯಿಬಿಟ್ಟು ಹೇಳುತ್ತಿಲ್ಲ. ಶಿಕ್ಷಕರು ಇರುವುದರಲ್ಲೇ ಹೊಂದಾಣ ಕೆ ಮಾಡುವ ಕೆಲಸ ನಡೆಯುತ್ತಿದೆ.
ಕೆಲವು ಶಾಲೆಗಳಲ್ಲಿ ಅಡುಗೆ ಅನಿಲ ದೊರೆಯದ ಪಕ್ಷದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಸೌದೆ ಒಲೆಯಿಂದಾದರೂ ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ಊಣಬಡಿಸಲೇ ಬಎಖೆಂದು ತಾಕೀತು ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತ್ರಿಶಂಕು ಸ್ಥಿತಿಯಲ್ಲಿ ಶಿಕ್ಷಕರು ಇದ್ದಾರೆ.
ಅನುದಾನ ಸ್ಥಗಿತ: ರಾಜ್ಯ ಸರಕಾರವೂ ಕಳೆದ ಮೂರು ತಿಂಗಳಿAದ ಸುರಪುರ ಮತಕ್ಷೇತ್ರದಲ್ಲಿರುವ ಗ್ಯಾಸ್ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಏಜೆನ್ಸಿಯವರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಹಣವಿಲ್ಲದೆ ಬಡ್ಡಿಗೆ ತಂದು ಶಾಲೆ ಮಕ್ಕಳ ಬಿಸಿಯೂಟಕ್ಕೆ ತೊಂದರೆ ಆಗಬಾರದೆಂದು ವಿತರಿಸುತ್ತಿದ್ದಾರೆ. ಒಂದು ತಿಂಗಳಿಗೆ ಸುಮಾರು ೩ ಲಕ್ಷ ದಿಂದ ೬ ಲಕ್ಷ ರೂ. ವರೆಗೆ ಬೇಕಾಗುತ್ತದೆ. ಅಡುಗೆ ಅನಿಲ ನೀಡುವವರು ನಗದು ಪಾವತಿಸಿದ ಬಳಿಕವೇ ಅಡುಗೆ ಸಿಲಿಂಡರ್‌ಗಳನ್ನು ನೀಡತ್ತಾರೆ. ಏಜೆನ್ಸಿಗಳು: ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿರುವ ಶಾಲೆಗಳಿಗೆ ಅಡುಗೆ ಅನಿಲ ವಿತರಿಸಲು ಕೆಂಭಾವಿ, ಕಕ್ಕೇರಾ, ಹುಣಸಗಿ, ಕೊಡೇಕಲ್ ಏಜೆನ್ಸಿಗಳು ಪಡೆದುಕೊಂಡಿವೆ. ಮತಕ್ಷೇತ್ರದ ಕೊಡೇಕಲ್‌ನ ಅಮಾರೇಶ್ವರ ಏಜೆನ್ಸಿಗೆ ೪೯ ಅಕ್ಷರ ದಾಸೋಹ ಕೇಂದ್ರಗಳಿದ್ದು, ೮೯೨೯ ವಿದ್ಯಾರ್ಥಿಗಳಿಗೆ ಒಟ್ಟು ೯೪ ಸಿಲಿಂಡರ್ ಬೇಡಿಕೆಯಿದ್ದು, ೯೧ ಅಡುಗೆ ಅನಿಲ ವಿತರಿಸಲಾಗುತ್ತದೆ.
ಪೂರೈಕೆ: ಕೆಂಭಾವಿ ಶ್ರೀನಿಧಿ ಗ್ಯಾಸ್ ಏಜೆನ್ಸಿಯಿಂದ ೯೦ ಅಕ್ಷರ ದಾಸೋಹ ಕೇಂದ್ರಗಳಿಗೆ ೧೬,೮೯೧ ವಿದ್ಯಾರ್ಥಿಗಳಿಗೆ ೧೭೧ ಸಿಲಿಂಡರ್ ಬೇಡಕೆಯಿದ್ದು, ೧೭೮ ಪೂರೈಸಲಾಗುತ್ತದೆ. ಕಕ್ಕೇರಾ ಬೃಂದಾ ಗ್ಯಾಸ್ ಏಜೆನ್ಸಿ ವ್ಯಾಪ್ತಿಯ ಅಕ್ಷರ ದಾಸೋಹ ಕೇಂದ್ರಗಳಿಗೆ ೨೧,೧೬೬ ವಿದ್ಯಾರ್ಥಿಗಳಿಗೆ ೩೩೬ ಬೇಡಿಕೆಯಿದ್ದು, ೩೩೩ ಸಿಲಿಂಡರ್ ವಿತರಿಸಲಾಗುತ್ತದೆ. ಹುಣಸಗಿಯ ಸಹನಾ ಗ್ಯಾಸ್ ಏಜೆನ್ಸಿಯ ೭೧ ಅಕ್ಷರ ದಾಸೋಹ ಕೇಂದ್ರಗಳಿಗೆ ೧೨೭೭೬ ವಿದ್ಯಾರ್ಥಿಗಳಿಗೆ ೧೬೨ ಸಿಲಿಂಡರ್ ಬೇಡಿಕೆಯಿದ್ದು, ೧೬೨ ಪೂರೈಸಲಾಗುತ್ತಿದೆ.


ಹೊಂದಾಣ ಕೆ: ಗ್ಯಾಸ್ ಏಜೆನ್ಸಿಗಳಿಗೆ ೩ ತಿಂಗಳಿAದ ಸರಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಸುರಪುರ ಮತಕ್ಷೇತ್ರದಲ್ಲಿ ಶಾಲೆಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದರಿಂದ ಶಿಕ್ಷಕರು ಮನೆಯಿಂದ ಸಿಲಿಂಡರ್ ತಂದರೆ ಇನ್ನೂ ಕೆಲವರು ಸೌದೆಯಿಂದ ಅಡುಗೆ ಮಾಡುತ್ತಿದ್ದಾರೆ. ಇದನ್ನೆಲ್ಲ ಹೊರಗಡೆ ಹೇಳಿದರೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಯದಿಂದ ಏನನ್ನು ಹೇಳಲಾಗುತ್ತಿಲ್ಲ ಎಂದು ಹಿರಿಯ ಮುಖ್ಯಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಶಾಲೆಗಳಲ್ಲಿ ಅಡುಗೆ ಅನಿಲ ಇಲ್ಲದೆ ಅಡುಗೆ ಮಾಡಲು ಕಷ್ಟವಾಗುತ್ತಿದೆ. ಸೌದೆಯಿಂದಲೇ ಅಡುಗೆ ಮಾಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಬಾಳೆ ಹಣ್ಣು, ಮೊಟ್ಟೆ, ಹಾಲು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಸಿಲಿಂಡರ್ ಒದಗಿಸುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸಿಐಟಿಯು ತಾಲೂಕು ಅಧ್ಯಕ್ಷೆ ಶಹಜಾದಿ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೆಲವು ಶಾಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿದ್ದು ಗಮನಕ್ಕೆ ಇದ್ದರೂ ನಿರ್ಲಕ್ಷö್ಯತನದಿಂದ ಮತನಾಡುತ್ತಾರೆ. ಮಾಧ್ಯಮದವರ ಎದುರಿಗೆ ಕಟ್ಟಿಗೆಯಿಂದಾರೂ ಅಡುಗೆ ಮಾಡಿ ಮಧ್ಯಾಹ್ನದ ಬಿಸಿಯೂಟ ನಿಲ್ಲಬಾರದು ಎನ್ನುವ ಮಾತುಗಳನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಶಿಕ್ಷಕರಿಗೆ ತಿಳಿಸಿರುವುದು ಸಮಸ್ಯೆ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ.
—ಕೋಟ್—
ಕಳೆದ ಮೂರು ತಿಂಗಳಿಂದ ಗ್ಯಾಸ್ ಏಜೆನ್ಸಿಗಳಿಗೆ ಅಕ್ಷರ ದಾಸೋಹ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಏಜೆನ್ಸಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಸುಮಾರು ೧೮ ಲಕ್ಷ ರೂ. ಬಾಕಿಯಿದ್ದು, ಕೂಡಲೇ ಪಾವತಿಸಲು ಸಂಬAಧಿಸಿದವರು ಕ್ರಮ ಕೈಗೊಂಡು ಗ್ಯಾಸ್ ಏಜೆನ್ಸಿಯವರ ಹಿತಕಾಪಾಡಬೇಕು.
ಬೃಂದ ಗ್ಯಾಸ್ ಏಜೆನ್ಸಿ ಮಾಲೀಕರು, ಕಕ್ಕೇರಾ.
—ಕೋಟ್—
ತಾಲೂಕಿನಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಲ್ಲ. ಎಲ್ಲ ಶಾಲೆಗಳಿಗೂ ಸಿಲಿಂಡರ್ ವಿತರಿಸಲಾಗಿದೆ. ಏಜೆನ್ಸಿಗಳಿಗೆ ಅನುದಾನ ನೀಡದಿದ್ದರೂ ಮೂರು ತಿಂಗಳಿಂದ ಸಿಲಿಂಡರ್ ನೀಡುತ್ತಿದ್ದಾರೆ. ಸಿಲಿಂಡರ್ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಯಲ್ಲಪ್ಪ ಚಂದನಕೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಸುರಪುರ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ