ಕೆಂಭಾವಿಯಲ್ಲಿ ನಾಡಹಬ್ಬ; ಎತ್ತುಗಳ ಸ್ಪರ್ಧೆ ಆಯೋಜನೆ

ವರದಿ: ನಾಗರಾಜ್ ನ್ಯಾಮತಿ
ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ದಸರಾ ಉತ್ಸವ ಸಮಿತಿ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶನಿವಾರ ಉತ್ತಮ ಎತ್ತುಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೈತ ಸಮಿತಿ ಸಂಚಾಲಕ ಮಹಿಪಾಲರೆಡ್ಡಿ ಡಿಗ್ಗಾವಿ, ಪ್ರಸಕ್ತ ವರ್ಷ ವಿಶೇಷವಾಗಿ ರೈತರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಭಾಗದ ರೈತರನ್ನು ಪ್ರೋತ್ಸಾಹಿಸಲು ಹಾಗೂ ಎತ್ತುಗಳ ಬಗ್ಗೆ ಕಾಳಜಿ ಮೂಡಿಸಲು ಈ ಸ್ಪರ್ಧೆಯನ್ನು ನಡೆಸಲಾಗಿದೆ. ಸ್ಪರ್ಧೆಗೆ ಪಟ್ಟಣದ ರೈತರು ಉತ್ತಮವಾಗಿ ಸ್ಪಂದಿಸಿದ್ದಾರೆ. ವಿಶೇಷವಾಗಿ ಅಲಂಕಾರವಾದ ಎತ್ತುಗಳನ್ನು ನೋಡುವದೆ ಕಣ್ಣುಗಳಿಗೆ ಹಬ್ಬದ ಸಂಭ್ರಮವನ್ನು ನೀಡುತ್ತದೆ ಎಂದು ಹೇಳಿದರು.
ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣ ಗೆಗೆ ರೈತ ಬಾಂಧವರು ಚಾಲನೆ ನೀಡಿದರು. ಬಾಜಾ ಭಜಂತ್ರಿಯೊAದಿಗೆ ದೇವಸ್ಥಾನದಿಂದ ಆರಂಭವಾದ ಮೆರವಣ ಗೆ ಕಿತ್ತೂರು ಚೆನ್ನಮ್ಮ ವೃತ್ತ, ಮಾಸಾಬಿ ದರ್ಗಾ, ಬಸವೇಶ್ವರ ವೃತ್ತ, ಮುಖ್ಯ ಬಜಾರ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಮುಕ್ತಾಯವಾಯಿತು.
ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ತಮ ಎತ್ತುಗಳ ಆಯ್ಕೆಯಲ್ಲಿ ಮೂರು ಜೋಡಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಜೋಡಿಗೆ ೫ ಸಾವಿರ, ದ್ವಿತೀಯ ಜೋಡಿಗೆ ೩ ಸಾವಿರ ಹಾಗೂ ತೃತಿಯ ಜೋಡಿಗೆ ೨ ಸಾವಿರ ರೂಪಾಯಿ ಪ್ರಶಸ್ತಿ ಘೋಷಿಸಲಾಯಿತು. ಅ.೨೦ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವದು ಎಂದು ದಸರಾ ಸಮಿತಿ ತಿಳಿಸಿದೆ.
ಈ ಒಂದು ಕಾರ್ಯಕ್ರಮದಲ್ಲಿ ಸುಮಾರು ೪೦ ಜೋಡೆತ್ತುಗಳು ಭಾಗವಹಿಸಿ ನೋಡುಗರ ಗಮನ ಸೆಳೆದೆವು. ರೈತ ಮುಖಂಡರು ಹಾಗೂ ದಸರಾ ಉತ್ಸವ ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
–ಕೋಟ್—
೩ನೇ ವರ್ಷದ ಉತ್ಸವದಲ್ಲಿ ವಿದ್ಯಾರ್ಥಿಗಳ ಜೊತೆಗೆ ರೈತರಿಗಾಗಿ ಹಾಗೂ ಪಟ್ಟಣದ ಮಹಿಳೆಯರಿಗಾಗಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಪಟ್ಟಣದ ದಸರಾ ಉತ್ಸವ ಕಾರ್ಯಕ್ರಮದ ಗಾತ್ರ ಹೆಚ್ಚುತ್ತಿದೆ. ಸರ್ವ ಸದಸ್ಯರ ಹಾಗೂ ಪಟ್ಟಣದ ನಿವಾಸಿಗಳ ಸಹಕಾರ ಅಮೋಘ.
ಡಿ.ಸಿ.ಪಾಟೀಲ, ಅಧ್ಯಕ್ಷರು ದಸರಾ ಉತ್ಸವ ಸಮಿತಿ ಕೆಂಭಾವಿ
ಚಿತ್ರ: ೧೪ ಎಸ್‌ಯುಆರ್ ೧..
ಸುರಪುರ: ತಾಲೂಕಿನ ಕೆಂಭಾವಿಯ ದಸರಾ ಉತ್ಸವ ಸಮಿತಿ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶನಿವಾರ ಉತ್ತಮ ಎತ್ತುಗಳ ಸ್ಪರ್ಧೆಗೆ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಚಿತ್ರ: ೧೪ ಎಸ್‌ಯುಆರ್ ೧ಎ
ಸುರಪುರ: ತಾಲೂಕಿನ ಕೆಂಭಾವಿಯ ದಸರಾ ಉತ್ಸವ ಸಮಿತಿ ವತಿಯಿಂದ ್ಲ ನಾಡಹಬ್ಬ ದಸರಾ ಅಂಗವಾಗಿ ಶನಿವಾರ ಪಟ್ಣದಲ್ಲಿ ಉತ್ತಮ ಎತ್ತುಗಳ ಸ್ಪರ್ಧಾ ಮೆರವಣ ಗೆ ನಡೆಯಿತು.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ