ವರದಿ: ನಾಗರಾಜ್ ನ್ಯಾಮತಿ
ಮತ್ತೊಬ್ಬ ವ್ಯಕ್ತಿಗೆ ಕೈ ತಿರುವಿ ಕಪಾಳ ಮೋಕ್ಷ
ಸುರಪುರದ ಮಲ್ಲಾ ಬಿ ಗ್ರಾಪಂ ಕೇಂದ್ರದಲ್ಲಿ ನಡೆದ ಘಟನೆ
ಕ್ರಾಂತಿವಾಣಿ ವಾರ್ತೆ: ಸುರಪುರ: ಶುದ್ಧ ಕುಡಿಯುವ ನೀರಿನ ಘಟಕದ ನಲ್ಲಿ(ನಳ) ಮುರಿದಿದ್ದರಿಂದ ರೊಚ್ಚಿಗೆದ್ದ, ಸ್ವಚ್ಛತಾ ಅಡಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಮತ್ತೊಬ್ಬರಿಗೆ ಕೈ ತಿರುವಿ ಕಪಾಳ ಮೋಕ್ಷ ಮಾಡಿ ಭಯದ ವಾತಾವರಣ ಸೃಷ್ಟಿಯಾದ ಘಟನೆ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ನಿವಾಸಿಗಳಾದ ಸಿದ್ದಣ್ಣ ದೊಡ್ಡಮನಿ ಹಾಗೂ ಶಿವಶಂಕರ ತಳವಾರ ನೀರು ತರಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಬಿಲ್ಕಲೆಕ್ಟರ್ ಕರೆಂಟ್ ಹೋಗಿದೆ. ಬಂದ ಮೇಲೆ ಬಿಡುತ್ತೇನೆ ಎಂದಿದ್ದಾರೆ. ಆ ವೇಳೆ ಮಾತಿಗೆ ಮಾತು ಬೆಳೆದಿದೆ. ಪಿಡಿಒ ಜತೆ ಪೋನ್ನಲ್ಲಿ ಮಾತನಾಡುವಂತೆ ಬಿಲ್ಕಲೆಕ್ಟರ್ ತಿಳಿಸಿದ್ದಾನೆ. ಸಿದ್ದಣ್ಣ ಮಾತನಾಡಿದ್ದಾನೆ. ಆಗ ಪಿಡಿಒ ಮತ್ತು ಸಿದ್ದಣ್ಣ ಒಬ್ಬರಿಗೊಬ್ಬರು ನಿಂದಿಸಿಕೊAಡಿದ್ದಾರೆ.
ಬಳಿಕ ನಿವಾಸಿಗಳು ನಲ್ಲಿಯನ್ನು ಮುರಿದು ಹಾಕಿ ಮೂರು ದಿನ ಆಗಿದೆ ಎನ್ನಲಾಗುತ್ತಿದೆ.
ಪಿಡಿಒ ಅವರಿಬ್ಬರನ್ನು ಕರೆಯಿಸಿ ಗ್ರಾಮ ಪಂಚಾಯತ್ ಆವರಣಕ್ಕೆ ಬರುತ್ತಿದ್ದಂತೆ ಚಪ್ಪಲಿಯಿಂದ ಹೊಡೆದು, ಕಪಾಳ ಮೋಕ್ಷ ಮಾಡುತ್ತಾರೆ. ಮತ್ತೊಬ್ಬ ವ್ಯಕ್ತಿಗೆ ಕೈಯನ್ನು ತಿರುವಿ ಕಪಾಳಕ್ಕೆ ಹೊಡೆಯುತ್ತಾರೆ. ಇದನ್ನು ಬಹುತೇಕ ಗ್ರಾಮಸ್ಥರು ನಿಂತು ನೋಡುತ್ತಿದ್ದಾರೆ. ಇನ್ನು ಕೆಲವು ಬಿಡಿಸಲು ಹೋಗುತ್ತಿರುವುದನ್ನು ಕಾಣಬಹುದು.
ಮಲ್ಲಾ ಬಿ ಗ್ರಾಮದ ನಿವಾಸಿಗಳಾದ ಸಿದ್ದಣ್ಣ ದೊಡ್ಡಮನಿ ಹಾಗೂ ಶಿವಶಂಕರ ತಳವಾರ್ ಎಂಬುವವರ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ಪ್ರಾಣ ಬೆದರಕಿಯನ್ನು ಪಿಡಿಒ ಹಾಕಿದ್ದು, ಹಾಡುಹಗಲಲ್ಲೇ ಪಂಚಾಯತ ಸಭಾಂಗಣದಲ್ಲಿ ರಾಜಾರೋಷವಾಗಿ ಚಪ್ಪಲಿಯಲ್ಲಿ ಹೊಡೆದು ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ಪ್ರತಿಕೆಯೊಂದಿಗೆ ಮಾತನಾಡಿದ ಪಿಡಿಒ ಪುತ್ರಪ್ಪಗೌಡ ಮಾತನಾಡಿ, ಕರೆಂಟ್ ಇಲ್ಲದೆ ಆರ್ಒ ಪ್ಲಾಂಟ್ನಿAದ ನೀರು ಕೊಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದಾಗ ಸಿದ್ದಣ್ಣ ಮತ್ತು ಶಿವಶಂಕರ ಇಬ್ಬರು ಮನಸ್ಸೋ ಇಚ್ಛೆ ನಿಂದಿಸಿದರು. ಗ್ರಾಪಂ ಕಚೇರಿಗೆ ಕರ್ತವ್ಯ ನಿರ್ವಹಿಸಲು ಹೋದಾಗ ನನಗೆ ಮತ್ತು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಅಂಗಿ ಹಿಡಿದು ಎಳೆದಾಡಿದ್ದಾರೆ. ಅಧಿಕಾರಿಗಳು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ಕೆಲಸಕ್ಕೆ ಅಡ್ಡಿಸಿದ್ದರಿಂದ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರಿಂದ ಗ್ರಾಪಂ ಅಧ್ಯಕ್ಷರ ಜತೆಗೂಡಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಲ್ಲಾ ಬಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನಲ್ಲಿ ಮತ್ತು ಸಾರ್ವಜನಿಕ ನಲ್ಲಿಗಳನ್ನು ಮುರಿದಿದ್ದಾರೆ. ನೌಕರರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮವಾರ ಪಿಡಿಒ ಅವರಿಗೆ ಘಟನೆ ಕುರಿತು ನೋಟಿಸ್ ನೀಡಲಾಗುವುದು. ಪಿಡಿಒ ಅವರು ತಪ್ಪು ಮಾಡಿದ್ದು ಕಂಡು ಬಂದರೆ ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ತಾಪಂ ಇಒ ಬಸವರಾಜ ಸಜ್ಜನ್ ತಿಳಿಸಿದ್ದಾರೆ.
ಗುಂಡಾವರ್ತನೆ ತೋರಿದ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನಾ ಸೇವೆಯಿಂದ ಅಮಾನತುಗೊಳಿಸಬೇಕು. ಅಲ್ಲದೆ ಅಧಿಕಾರಿಗಳು ಮಾನವೀಯತೆ ಮತ್ತು ಸಮಧಾನ ಮರೆತಿದ್ದಾರೆ. ಅಂಥಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.