ಕ್ರಾಂತಿವಾಣಿ ವಾರ್ತೆ ಸುರಪುರ: ಇಂದಿನ ಯುವ ಪೀಳಿಗೆ ಆಧುನಿಕತೆಯ ವೈಚಾರಿಕತೆಯ ಭರದಲ್ಲಿ ಧರ್ಮ, ಸಂಸ್ಕೃತಿ, ಶ್ರದ್ಧೆ, ಭಕ್ತಿಯನ್ನು ಮರೆಯುತ್ತಿದ್ದು ಧರ್ಮ ಜಾಗೃತಿ ಎಲ್ಲೆಡೆ ಬೇರೂರುವಂತೆ ಮಾಡುವುದು ಪ್ರತಿಯೊಬ್ಬ ಹಿರಿಯರ ಕರ್ತವ್ಯವಾಗಿದೆ ಎಂದು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಕೆಂಭಾವಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ನಡೆದ ಮಹಾಶಕ್ತಿ ಜಗನ್ಮಾತೆ ಶ್ರೀದೇವಿ, ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಉದ್ಘಾಟನೆ, ಕಳಸಾರೋಹಣ, ಶ್ರೀ ಮಠದ ಶಿಲಾಮಂಟಪ ಶಂಕುಸ್ಥಾಪನೆ, ಅಯ್ಯಾಚಾರ ಶಿವದೀಕ್ಷೆ ಹಾಗೂ ಭಾವೈಕ್ಯತೆ ಜನಜಾಗೃತಿ ಧರ್ಮಸಭೆಯಲ್ಲಿ ಧರ್ಮ ಸಂದೇಶ ನೀಡಿದ ಶ್ರೀಗಳು, ಆಧುನಿಕ ಶಿಕ್ಷನದ ಭರಾಟೆಯಲ್ಲಿ ಯುವ ಪೀಳೀಗೆ ನಮ್ಮ ಸ್ಕೃತಿಯನ್ನು ಮರೆಯುತ್ತಿದ್ದಾರೆ, ಶಿಕ್ಷಣದ ಜೊತೆಗೆ ಅಧ್ಯಾತ್ಮ ಚಿಂತನ ಶಿಕ್ಷಣವನ್ನು ನಮ್ಮ ಯುವ ಪೀಳಿಗೆಗೆ ನೀಡುವಂತಾಗಬೇಕು ಎಂದು ಹೇಳಿದರು.
ಯುವಕರು ಧರ್ಮ ಪಾಲನೆ ಮಡಬೇಕಾದರೆ ಅವರನ್ನು ಸದ್ಧರ್ಮದಲ್ಲಿ ನಡೆಯುವಂತೆ ಮಾಡುವುದು ಹಿರಿಯರ ಗುರುತರ ಜವಾಬ್ದಾರಿಯಾಗಿದೆ ಎಂದ ಅವರು ಜೀವನದ ಸಮಸ್ಯೆಗಳನ್ನು ಆತ್ಮ ಬಲದಿಂದ ಎದುರಿಸಬೇಕೆ ಹೊರತು ಆತ್ಮಹತ್ಯೆ ಘೋರ ಕೃತ್ಯಗಳಿಂದ ಅಲ್ಲ ಎಂದು ಹೇಳಿದರು. ಎಲ್ಲ ಧರ್ಮಗಳಿಂತ ಮಾನವ ಧರ್ಮ ಅತ್ಯಂತ ಶ್ರೇಷ್ಠವಾಗಿದ್ದು ಅಂಥಾ ಮನವ ಧರ್ಮದ ತಳಹದಿಯ ಮೇಲೆ ನಮ್ಮ ವೀರಶೈವ ಧರ್ಮ ಮುನ್ನಡೆಯುತ್ತಿದೆ. ಅಗಸ್ತö್ಯ ಋಷಿಗಳಿಗೆ ರೇಣುಕಾಚಾರ್ಯರು ಹತ್ತು ಧರ್ಮದ ಬೋಧಣೆಗಳನ್ನು ಮಾಡಿದರು. ಅಂಥಾ ಧರ್ಮಧಾರಿತ ತತ್ವಗಳ ಮೇಲೆ ನಮ್ಮ ವೀರಶೈವ ಧರ್ಮ ಮುದುವರೆಯುತ್ತಿದೆ ಎಂದ ಅವರು ಧರ್ಮ ಕಾರ್ಯದಲ್ಲಿ ಕಂಭಾವಿ ಹಿರೇಮಠ ಸಂಸ್ಥಾನದ ಶ್ರೀ ಚನ್ನಬಸವ ಶಿವಾಚಾರ್ಯರು ಮಾಡುತ್ತಿರುವ ಕಾರ್ಯ ಅತ್ಯಂತ ಅಭಿನಂದಾರ್ಹ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಲಿಂಗನಗ್ಡ ಮಾಲಿ ಪಾಟೀಲ, ಕೆಂಭಾವಿಯ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೂ ಹಾಗೂ ಬಾಳೆಹೊನ್ನೂರ ರಂಭಾಪುರಿ ಮಠಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿದರು. ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.
ಶ್ರೀ ಚನ್ನಬಸವ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ ವಹಿಸಿದ್ದರು. ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ಸೋಮನಾಥ ಶಿವಾಚಾರ್ಯರು, ಶ್ರೀ ಮರಳ ಮಹಾಂತ ಶಿವಾಚಾರ್ಯರು, ಶ್ರೀ ಸೋಮೇಶ್ವರ ಶಿವಾಚಾರ್ಯರು, ಶ್ರೀ ರಾಜಯೋಗಿ ವಿರಾಜೇಂದ್ರ ಸ್ವಾಮಿಗಳು, ಶ್ರೀ ಭುವನೇಶ್ವರ ಸ್ವಾಮಿಗಳು, ಶ್ರೀ ಗಜದಂಡ ಶಿವಾಚಾರ್ಯರು, ಶ್ರೀ ಶಿವಪ್ರಕಾಶ ಶರಣು, ಪುರಸಭೆ ಸದಸ್ಯರಾದ ಪ್ರಿಯಾ ರಾಮನಗೌಡ, ಮಹ್ಮದ ಆರಿಫ್ ಖಾಜಿ, ಮುಖಂಡರಾದ ವಾಮನರಾವ ದೇಶಪಾಂಡೆ, ಸುರೇಶ ಸಜ್ಜನ, ಶರಣಬಸ್ಸು ಡಿಗ್ಗಾವಿ, ಅಮೀನರೆಡ್ಡಿ ಪಾಟೀಲ ಯಾಳಗಿ, ಅರುಣೋದಯ ಸೊನ್ನದ, ಸಾಹೇಬಲಾಲ ಆಂದೇಲಿ, ಮಹಿಪಾಲರೆಡ್ಡಿ ಡಿಗ್ಗಾವಿ, ಕೃಷ್ಣಯ್ಯ ಗುತ್ತೇದಾರ, ಪಿಎಸ್ಐ ವೆಂಕಣ್ಣ ಶಹಾಪೂರ, ಎಎಸ್ಐ ಬಲರಾಮ ರಾಠೋಡ ಇದ್ದರು.
ಡಾ, ವೆಂಕನಗೌಡ ಪೊಲೀಸ್ ಪಾಟೀಲ ಹಾಗೂ ಅಮರಯ್ಯಸ್ವಾಮಿ ಜಾಲಿಬಂಚಿ ನಿರೂಪಣೆ ಮಾಡಿದರು, ನಿಂಗನಗೌಡ ದೇಸಾಯಿ ಸ್ವಾಗತಿಸಿದರು, ರಾಜಶೇಖರಯ್ಯ ಹಿರೇಮಠ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರನ್ನು ಭೋಗೇಶ್ವರ ದೇವಸ್ಥಾನದಿಂದ ಮಠದವರೆಗೆ ಸುಮಂಗಲೆಯರ ಪೂರ್ಣಕುಂಭ, ಮಹಿಳೆಯರ ಡೊಳ್ಳು ವಾದ್ಯ, ಬಾಜಾ ಭಜಂತ್ರಿಯೊಂದಿಗೆ ಸಾರೋಟಿನಲ್ಲಿ ಮೆರವಣ ಗೆ ಮಾಡಲಾಯಿತು.