ಯುವ ಮತದಾರರು ತಪ್ಪದೆ ನೋಂದಣಿ ಮಾಡಿಕೊಳ್ಳಿ: ಜೀವನ ಕಟ್ಟಿಮನಿ

ವರದಿ: ಎನ್.ಎನ್.

ಕ್ರಾಂತಿವಾಣಿ  ವಾರ್ತೆ  ಸುರಪುರ: ನಗರಸಭೆ ವ್ಯಾಪ್ತಿಯ 45 ಮತಗಟ್ಟೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾರರ ಮತಪಟ್ಟಿಗೆ ಸೇರ್ಪಡಿಸುವ  ಕಾರ‍್ಯ ಭರದಿಂದ ಸಾಗಿದೆ ಎಂದು ಪೌರಾಯುಕ್ತ ಜೀವನ್ ಕಟ್ಟಿಮನಿ ತಿಳಿಸಿದರು.

ನಗರದ ನಗರಸಭೆ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸಂಚಾರ ಮಾಡಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ೧೮ ವರ್ಷ ಮೇಲ್ಪಟ್ಟು ಪ್ರತಿಯೊಬ್ಬರು ತಮ್ಮ ದಾಖಲಾತಿಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.

ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಮತದಾರರೇ ಇಲ್ಲಿ ಪ್ರಭುಗಳಾಗಿರುವುದರಿಂದ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿ  ಮತದಾನದ ಹಕ್ಕನ್ನು ಚಲಾಯಿಸಬೇಕು. ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿಕೊಂಡರು.

ಮತಗಟ್ಟೆ ಅಧಿಕಾರಿ ಬಿಲ್ ಕಲೆಕ್ಟರ್ ದತ್ತು ನಾಗಭುಜಂಗಿ, ನಗರಸಭೆ ಮೇಲ್ವಿಚಾರಕ ಯಲ್ಲಪ್ಪ ನಾಯಕ, ಆರ್ ಐ ವೆಂಕಟೇಶ್ ಕಲಬುರಗಿ, ಕಂದಾಯ ನಿರೀಕ್ಷಕ ಸಲೀಂ ಮಲ್ಲಿಕ್, ನಗರಸಭೆ ಜೆಇಇ ಮಹೇಶ್ ಚವಾಣ್, ಎಸ್ಐಗಳಾದ ಶಿವಪುತ್ರ, ಗುರುಸ್ವಾಮಿ, ಬಿಲ್ ಕಲೆಕ್ಟರ್ ಬಾಬುರಾವ್, ಹನುಮಂತ ನಾಯಕ ಸೇರಿದಂತೆ ಇತರರು ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ