ಕ್ರಾಂತಿವಾಣಿ ಶಹಾಪುರ.
ಯಾದಗಿರಿ (ಶಹಾಪುರ) ತಾಲೂಕಿನ ದೋರನಹಳ್ಳಿ ಗ್ರಾಮದ ನಿರಾಶ್ರಿತೆ ನಾಗಮ್ಮ ರಾಮಣ್ಣ ಮಡ್ನಾಳ್ (೮೧) ಅವರಿಗೆ ನೆರವು ದೊರಕಿಸಿ ಕೊಡುವಂತೆ ಸಮಾಜಿಕ ಕಾರ್ಯಕರ್ತರೊಬ್ಬರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ರವೀಂದ್ರ ಹೊನ್ನಾಲೆ ಅವರು ಗ್ರಾಮದ ವೃದ್ಧೆಯ ಮುರುಕಲು ಗುಡಿಸಲಿಗೆ ಭೇಟಿ ನೀಡಿ ವೃದ್ಧೆಯ ಸ್ಥಿತಿಗತಿ ಅವಲೋಕನ ಮಾಡಿದರು. ವೃದ್ಧೆಯು ವಾಸವಿರುವ ಗುಡಿಸಲು ಮುಳ್ಳು ಕಂಟಿಯ ಮಧ್ಯೆ ಇದ್ದು ಅಲ್ಲಿ ವಿಷ ಜಂತುಗಳ ತಾಣವೇ ಇದೆ. ಅದರಲ್ಲಿಯೆ ಆಕೆ ನಿತ್ಯ ವಾಸ, ಆಕೆಯ ಸುತ್ತ ಮುತ್ತಲ ಮನೆಗಳ ಜನರು ಊಟ ನೀಡುತ್ತಾರೆ. ಆಕೆಯ ಗಂಡ ತೀರಿಹೋಗಿದ್ದು ಅಲ್ಲಿಯೆ ಸಮಾದಿ ಪಕ್ಕದಲ್ಲೆ ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾಳೆ. ನಾಲ್ಕು ಜನ ಗಂಡು ಮಕ್ಕಳು ಇದ್ದು ದುಶ್ಚಟಗಳಿಗೆ ದಾಸರಾದ ಅವರು ಎಲ್ಲೆಂದರಲ್ಲಿ ಇರುತ್ತಾರೆ. ವೃದ್ಧೆಯ ಬಳಿ ಮತದಾನ, ಆಧಾರ್, ಪಡಿತರ ಸೇರಿದಂತೆ ಯಾವುದೆ ತರಹದ ಗುರುತಿನ ಚೀಟಿಯು ಇಲ್ಲದೆ ಸರ್ಕಾರದ ಯಾವುದೆ ಸೌಲಭ್ಯ ಪಡೆಯದ ವಂಚಿತೆಯಾಗಿದ್ದಾಳೆ. ಆಕೆಯದ್ದೆ ಖಾಲಿ ನಿವೇಶನವಿದ್ದು ಅಲ್ಲಿಯೇ ಮನೆ ನಿರ್ಮಿಸಲು ನ್ಯಾ.ರವಿಂದ್ರ ಹೊನ್ನಾಲೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಉಪತಹಸಿಲ್ದಾರ್ ಸಂಗಮೇಶ ನಾಯಕ್, ಆರ್ಐ ಮಹೇಂದ್ರಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ದೇವೆಂದ್ರ ಬಿರಾದಾರ ಸೇರಿದಂತೆ ಅಂಬೇಡ್ಕರ್ ನಗರದ ನಿವಾಸಿಗಳು ಇದ್ದರು.
ವೃದ್ದ ಮಹಿಳೆಗೆ ಸೂರಿನ ಭಾಗ್ಯ.
ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ರವೀಂದ್ರ ಹೊನ್ನಾಲೆ ಅವರು ತಾಲೂಕಿನ ದೋರನಹಳ್ಳಿ ಗ್ರಾಮದ ವೃದ್ಧೆ ನಾಗಮ್ಮ ರಾಮಣ್ಣ ಮಡ್ನಾಳ್( 80) ಮುರುಕಲು ಗುಡಿಸಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂರಿನ ಜೊತೆ ಮೂಲಭೂತ ಸೌಕರ್ಯಗಳು ಈ ವೃದ್ದ ಮಹಿಳೆಗೆ ತಕ್ಷಣ ಒದಗಿಸಿಕಡುವಂತೆ ಸೂಚನೆ ನೀಡಿದ ಮೇರೆಗೆ ತಕ್ಷಣ ಸ್ಪಂದಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಅಧಿಕಾರಿ ಸೋಮಶೇಖರ್ ಬಿರೆದಾರವರು ಶನಿವಾರ ಗ್ರಾಮದ ನಾಗಮ್ಮಳ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಮನಗಂಡು ತಕ್ಷಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ಇವರಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮಾದರಿ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದರು. ತಾವೇ ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಕ್ಷಣ ಜೋಪಡಿಯ ಸುತ್ತಮುತ್ತಲು ಜೆಸಿಬಿ ಮೂಲಕ ಸ್ವಚ್ಛತೆ ಮಾಡಿಸಿ ಮಾನವೀಯತೆ ಮೆರೆದರು.
ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ಕೆ ಗ್ರಾಮದ ಜನತೆ ಶ್ಲಾಘಿಸಿದ್ದಾರೆ. ಜೊತೆಗೆ ತಕ್ಷಣ ಸ್ಪಂಧಿಸಿದ ಅಧಿಕಾರಿಗಳ ಕಾರ್ಯಕ್ಕೂ ಜನ ಶಬ್ಬಾಸ್ ಎಂದಿದ್ದಾರೆ.
ಇದೆ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಸದಸ್ಯೆ ತಾಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾಮ ಆಡಳಿತ ಅಧಿಕಾರಿ, ಹಾಗೂ ಆರೋಗ್ಯ ಅಧಿಕಾರಿಗಳು, ಗ್ರಾಮದ ನಿವಾಸಿಗಳು ಹಾಜರಿದ್ದರು.
ನೊಂದವರ, ಸರ್ಕಾರಿ ಸೌಲಭ್ಯ ವಂಚಿತ ವ್ಯಕ್ತಿಗಳು, ಮಾನಸಿಕ ಅಸ್ವಸ್ಥರು, ವಿಕಲಚೇತನರು, ಕೋಮು ಘರ್ಷಣೆಗೆ ಬಲಿಯಾದವರು, ಎಸ್ಸಿ, ಎಸ್ಟಿ, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕೆಲಸಗಾರರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲು ಸದಾ ಸಿದ್ಧವಿದೆ.
ನ್ಯಾ. ರವೀಂದ್ರ ಹೊನಾಲೆ.
ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ.
80 ವಯಸ್ಸಿನ ವೃದ್ದೆ ನಾಗಮ್ಮಳಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ವಿಳಂಬವಾಗದಂತೆ ತಕ್ಷಣ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಉಮಕಾಂತ ಹಳ್ಳೆ ತಹಸೀಲ್ದಾರ್ ಶಹಾಪುರ.
ಅಜ್ಜಿಗೆ ಸುಮಾರು ೮೧ ವರ್ಷ. ಆಕೆಗೆ ಜಾಗವಿದೆ ಮನೆಯಿಲ್ಲ. ಆಕೆಯ ನೆರವಿಗೆ ನ್ಯಾ.ಹೊನ್ನಾಲೆ ಸರ್ ಬಂದಿದ್ದು ಆಕೆಗೆ ಅಗತ್ಯ ನೆರವು ಸಿಗುವ ನಂಬಿಕೆ ಇದೆ. ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದರು ಏನು ಕ್ರಮ ಆಗಿರಲಿಲ್ಲ. ಕೊನೆಗೆ ಪತ್ರಕರ್ತರು ಹಾಗೂ ಹೋರಾಟಗಾರ ಮಲ್ಲಯ್ಯ ಪೋಲಂಪಲ್ಲಿ ನೆರವಿನಿಂದ ಈಗ ವೃದ್ಧೆಗೆ ಸೂರು, ಪಿಂಚಣಿ, ರೇಷನ್ ವ್ಯವಸ್ಥೆ ಆರಂಭವಾಗಿದೆ.”
–ಸುರೇಶರಡ್ಡಿ ದೋರನಹಳ್ಳಿ ಕಾರ್ಮಿಕ ಮುಖಂಡ
ಅಜ್ಜಿಯ ಈಗಿರುವ ಮನೆಯ ಸ್ಥಿತಿ